ಪಂಡಿತ

>> Tuesday, April 27, 2010


ನಡೆಗಿಂತ ನಗೆ ಗಂಭೀರ
ಮೌನದಲಿ ಸಾವಿರಾರು ಭಾವಗಳ
ಸರದಾರ
ಪಾಂಡಿತ್ಯ-ಅಧ್ಯಯನ ಹೂಂಕಾರ
ಝೇಂಕಾರಗಳ ಗ್ರಹಿಸಿ ಗಮನಿಸುವ
ಕಾವಲುಗಾರ
ಬ್ರಹ್ಮಾನುಭವದ ಬ್ರಾಹ್ಮಣ್ಯ
ಸಂಸ್ಕೃ-ಸಂಸ್ಕೃತಿಗಳ ಮಂಥನದಿ
ಬೀಗುವ ಛಲಗಾರ
ಟೀಕೆ-ಟಿಪ್ಪಣಿಗೆಲ್ಲ ಇಲ್ಲಿ
ಇಲ್ಲ ಉತ್ತರ
ಜ್ಞಾನದಾಗರದ ಕನ್ನಡಕದ ಹಿಂದಿನ ಕಂಗಳ ಮಿಂಚು
ತುಟಿ ಮೇಲಿನ ಕಿರುನಗೆ ಸಾಗಿಯೇ
ಇರಲಿ ಹೀಗೆ ನಡೆದದೆಲ್ಲ ರಾಜಮಾರ್ಗ

0 comments: