>> Friday, April 16, 2010


ನಿನಗೆ ನೀನೇ ಸಾಟಿ
ಅಂದವಲ್ಲವೆ ಹಗಲುಗನಸುಗಳು
ಹೆಣೆಯಲು?
ಜೇಡರ ಬಲೆಯ ಸಾಹಸವೂ
ಬೇಕಿಲ್ಲ ಈ ಕನಸುಗಳಿಗೆ
ಕಣ್ಣು ಬಿಟ್ಟರೆ ಸಾಕು ನಿತ್ಯ
ಸತ್ತವರ, ರಕ್ತ ಹರಿಸಿದವರ
ಹಗಲುಗಳ್ಳ ರಾಜ-
ಕಾರಣಗಳ ದೊಂಬರಾಟದ
ಅರ್ಥರಹಿತ ಸುದ್ದಿ ತರುವ
ಪತ್ರಿಕೆ.
ಹೊರಗೆ ಹೊರಟರೆ
ಅಸಹ್ಯ ಬರಿಸುವ, ಹೆಣ್ಣು
ಮಣ್ಣಿಗೆ ಬಡಿದಾಡುವ
ವ್ಯಸನಿಗಳ ಕೂಟ
ನಾ ಭಂಡನಾದರೆ ಬದುಕುವೆ
ಆದರ್ಶಗಳ ಮೂಲೆಗೆಸೆದು ಗಂಟುಕಟ್ಟಿ
ಷಂಡನಾಗುವೆ ಏನೇನು ಪಡೆಯದೇ
ನನ್ನ ಮತ್ತಲಿ ನಾನಿದ್ದರೆ
ದಕ್ಕದು ನನಗಿನ್ನೇನು ಎಂದು ಅಂದುಕೊಳ್ಳುವೆ
ಅದಕೆ ಬಾ-
ಎಲ್ಲ ಬಿಟ್ಟು ಒಂದೆಡೆ
ಹಗಲುಗನಸ ಹೆಣೆಯಲು
ಕೆಲಕ್ಷಣ ನೀಡುವ
ನೆಮ್ಮದಿಗಾದರೂ

0 comments: