ಕುಡಿದು ಸಾಯೋಣ

>> Friday, April 23, 2010



ಸಂತೋಷದ ವಿಷಯ
ಹೊಸ ವರುಷದಂದು ಶೆರೆ ಕುಡಿದು
ಸತ್ತವರಿಗೆ ಹತ್ತುಸಾವಿರ ಬಹುಮಾನ.
ಕುಡಿಯೋಣ ಎಲ್ಲರೂ
ಕುಡಿ,ಕುಡಿದು ಸಾಯೋಣ
ಅಯ್ಯೋ ಪಾಪ!
ಕುಡಿದು ಸತ್ತ
ಎಂದನುಕಂಪವ ತೋರಿ
ಘೋಷಿಸುವರು ಪರಿಹಾರ ಧನವ
ಹಗಲಿರುಳು ಬೆವರು ಸುರಿದ
ವರಿಗೆಲ್ಲ ಈ ದೇಶದ
ಬೊಕ್ಕಸದಿ ಹಣ
ಓದಿ, ಬರೆದು ಇಳಿವಯದಲ್ಲಿ
ಪಡೆಯುವ ಸಾಹಿತಿಗೆ ಬರೀ
ಸಾವಿರ ಪ್ರಶಸ್ತಿ ಹೆಸರಲಿ!
ಅದಕೆ ಕುಡಿಯೋಣ ಎಲ್ಲರೂ
ದುಡಿಯೋದ ಬಿಟ್ಟು ಖಾದಿಗಳು
ನೀಡುವ ಪರಿಹಾರಕೆ

0 comments: