ಗಾನ ವಿದ್ಯಾ ಬಡಿ ಕಠಿಣ ಹೈ

>> Saturday, September 25, 2010


ಬದಕು ನೀಡಿದ ಕಠಿಣತೆಯ
ಸವಾಲಾಗಿ ಸ್ವೀಕರಿಸಿ ಬೆನ್ನು
ಹತ್ತಿದ ನಾದಗಳ ಹಿಡಿದಿಟ್ಟು
ಹದವಾಗಿ ಮುದವಾಗಿ
ರಾಗಗಳ ಆಲಾಪಿಸಿ ಜಯಿಸಿದ
ಗಾನ ಗಾರುಡಿಗ
ಒಳಗಣ್ಣ ಬೆಳಕ ಹಿಡಿದು
ಅಂಧರ ಕಣ್ಣಾಗಿ ಹೆಳವರ ಕಾಲಾಗಿ,
ಅನಾಥರ ನಾಥರಾಗಿ ಬಾಳ
ದಯಪಾಲಿಸಿದ ನಡೆದಾಡುವ ದೇವರು.
ಇಷ್ಟ ಲಿಂಗದ ಸಂಗದಲಿ
ಲಿಂಗಾಂಗ ಸಾಮರಸ್ಯದ ಉತ್ತುಂಗಕೆ
ಏರಿದರೂ ಎನಗಿಂತ ಕಿರಿಯರಿಲ್ಲ
ಎಂದು ಹಾಡಿದ ಪುಟ್ಟ'ರಾಜ'.
ಮೈ ತುಂಬಾ ಧ್ಯಾನದ ಕಂಪು
ಕಿವಿ ತುಂಬ ನಾದದ ಇಂಪು
ಬೆರಳಾಟಕೆ ಸಿಕ್ಕ ತಾಳ-ವಾದ್ಯಗಳು
ನಲಿದು ಸಂಭ್ರಮಿಸಿದ ಕ್ಷಣಗಳಲಿ.......
ಈಗ ಮೌ.....ನ. ದಿವ್ಯ ಮೌನ......
ಆ ಮೌನದಲಿ ಮೆರೆಯುವ ಮರೆಯಾಗದ
ಗುಂಗು ಹಿಡಿಸಿರುವ ತರಂಗಗಳು
ನಿಧಾನ ಸುಳಿಯುತ ಅಲೆಯುತಿವೆ.
ನೀ ನಡೆದಾಡಿದ ಹೆಜ್ಜೆ ಗುರುತಿನಲಿ.
ಅಳುವ ಅಂಧರ ಕಣ್ಣೊರೆಸಲು
ಅನಾಥರ ಸಾಕಿ - ಸಲಹಲು ನೀ
ಹುಟ್ಟಿ ಬಾ ಮತ್ತೊಮ್ಮೆ ಎನ್ನಲು
ಬಿಟ್ಟು ಹೋಗಿಲ್ಲ ವಲ್ಲ ಅಜ್ಜ
- ಸಿದ್ದು ಯಾಪಲಪರವಿ

Read more...

ವಿರೇಶ್ವರ ಪುಣ್ಯಾಶ್ರಮ



ಇಲ್ಲಿ ಎಲ್ಲಂದರಲ್ಲಿ ನಾದ
ನಿನಾದಗಳ ಕಂಪು
ಅಂಧರ ಬೆಳಕಲಿ ಅನಾಥರ ಖುಷಿಯಲಿ
ಸಂಭ್ರಮಿಸುವ ತಂಪು.
ಪುಣ್ಯಾಶ್ರಮದ ಪ್ರತಿ ಕಲ್ಲಲಿ
ಸರಿಗಮಗಳ ಸರಪಳಿ.
ಅಂಗುಲಂಗುಲದ ನಡೆಯಲಿ
ಅಂತಕರಣದ ಹೊಳಪು.
ಪಂಚಾಕ್ಷರ ಗವಾಯಿಗಳವರ
ಉಭಯ ಗಾನ ವಿಶಾರದೆ
ಇಲ್ಲಿ ಅಲುಗದೆ ನೆಲೆಯೂರಿ
ತನ್ಮಯಗಳಾಗಿ ಮೈ ಮರೆತು
ನಲಿಯುತ ಸಂಚರಿಸುವ
ಪರಿಯನು ಅರಿಯದವರು ಯಾರು?
ಪುಟ್ಟರಾಜರ ಶ್ರಮದ ಬೆವರ
ಹನಿಯಲೂ ಸೂಸುತಿದೆ ಗಾನ ಸುಗಂಧ
ಸರಿಗಮಗಳ ಜಪದಲಿ.
ಇಲ್ಲೊಮ್ಮೆ ಜಪಿಸಿದರೆ ಮೈ
ಮನಗಳಲಿ ಕಂಪನ.
ಮಲಿನವಾದ ಮನಸನು
ಬದಿಗಿಟ್ಟು ಒಮ್ಮೆ ಕೈಮುಗಿದು
ಒಳಗೆ ಬಾ ನಾದ ಪ್ರಿಯನೆ
ಎಲ್ಲಂದರಲಿ ಬೀಸುವ ಗಾನ
ಗಂಧದ ಕಂಪನು
ನಿನ್ನದಾಗಿಸಲು

Read more...

ಅಂಧ ಆಂಕ್ರಂದನ


ವಿಧಿ ಕಣ್ಣು ಕಟ್ಟಿದಾಗ
ಒಳಗಣ್ಣು ತೆರೆಸಿದ ಕರುಣಾ
ಸಾಗರನೆ.
ಹೆತ್ತೊಡಲ ಬರಸಿಡಿಲಿಗೆ
ಕಾರಣನಾಗಿ
ಬದುಕು ಶೂನ್ಯ
ವಾದಾಗ ಅಸಂಖ್ಯೆ
ಸಂಖ್ಯೆ ಬಳಸಿ ಬಾಳ
ಪಯಣದಿ ಜೀವಯಾನಕೆ
ಭಾವ ತುಂಬಿದ ಗುರುವಿನ
ಗುರುವೆ.
ನಾದ ಲೋಕದೊಳೊಂದು
ಹೊಸ ಲೋಕ ಸೃಷ್ಟಿಸಿ ದಿವ್ಯ
ಬೆಳಕ ತೋರಿ ಅಂಧತ್ವ
ದೂರಾಗಿಸಿದ ಜಗದಾದಿ ಗುರುವೆ.
ನೀನಿಲ್ಲದ ಜಗದ ಶೂನ್ಯವ
ತುಂಬುವ ಶಕ್ತಿ ಕರುಣಿಸು
ದಯಾಮಯಿ ಪ್ರಭುವೆ.
                                            ಸಿದ್ದು ಯಾಪಲಪರವಿ
                                                                    # 123 ಸಾಂಗತ್ಯ ಪ್ರಕಾಶನ ,ಶರಣಾರ್ಥಿ   ವಿಶ್ವೇಶ್ವರಯ್ಯನಗರ
ಕಳಸಾಪುರ ರಸ್ತೆ
ಗದಗ - 582103
9448358040

Read more...