ಇಂಗ್ಲೆಂಡ್ ಆಸ್ಪತ್ರೆಗಳು

>> Saturday, April 17, 2010

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಡಾ ರಾಜ್ ಅವರ ಜನಪ್ರಿಯ ಹಾಡು ನನಗೆ ಇಂಗ್ಲೆಂಡ್‌ನಲ್ಲಿ ಸದಾ ನೆನಪಾಗುತ್ತಿತ್ತು . ನಮ್ಮ ಊರು, ಆಹಾರ, ಸಂಸ್ಕ್ರತಿ ಹಾಗೂ ಜನಜೀವನದ ಮಹತ್ವದ ಅರಿವಾಗಬೇಕಾದರೆ ದೇಶಗಳನ್ನು ಸುತ್ತಬೇಕು. ಇದು ಬದುಕಿನ ಒಂದು ಮುಖವಾದರೆ, ಇನ್ನೊಂದೆಡೆ ನಮ್ಮ ನಾಡಿನ ಸಮಸ್ಯೆಗಳು ಕೂಡಾ ಅಷ್ಟೇ ದಟ್ಟವಾಗಿ ನಮ್ಮನ್ನು ಹೊರದೇಶಗಳಲ್ಲಿ ಕಾಡುತ್ತವೆ. ಒಮ್ಮೊಮ್ಮೆ "ದೇಶಿ ವ್ಯಾಮೋಹಕ್ಕೆ ಬಿದ್ದು ನಮ್ಮದೆಲ್ಲವು ಸರಿಲ್ಲ ಎಂದು ಅನಗತ್ಯ ಟೀಕಿಸುವ ಸಿನಿಕತನವು ಇರುತ್ತದೆ. ಅದೇ ಸಿನಿಕತನವನ್ನು ಬದಿಗಿರಿಸಿ ವಾಸ್ತವದ "ನ್ನೆಲೆಯಲ್ಲಿ, "ಡಿತದ ಒಳನೋಟ ಇಟ್ಟುಕೊಂಡು ಭಾವಾವೇಶಕ್ಕೆ ಒಳಗಾಗದೆ ಬೇರ ದೇಶಗಳನ್ನು ನೋಡಿದಾಗ ಸಹಜ ಚಿತ್ರಣ ನಮ್ಮ ಕಣೆದಿರು ತೆರೆದುಕೊಳ್ಳುತ್ತದೆ.
ಈ "ನ್ನಲೆಯಲ್ಲಿ ನಾನು ಇಂಗ್ಲೆಂಡ್ ದೇಶವನ್ನು ನೋಡಲಾರಂಭಿಸಿದೆ. ಅವರ ವಾಸ್ತವವಾದ, ವ್ಯಕ್ತಿಕೇಂದ್ರಿತ ಬದುಕು ,ಒಡೆದ ಮಡಿಕೆಯಂತಹ ಸಾಂಸಾರಿಕ ಜೀವನ, ಪ್ರಾಮಾಣಿಕತೆ ,ಅಹಂಕಾರ, ದೇಶಪ್ರೇಮ ,ಸ್ವಚ್ಛತೆ, ಸ್ವಚ್ಛಂದ ಮುಕ್ತ ಜೀವನ ಶೈಲಿ "ಗೆ ಒಂದಕ್ಕೊಂದು ಸ"ಕರಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಅವರು ಶ್ರೇಷ್ಠ, ನಾವು ಕನಿಷ್ಠ ಎಂಬ ನಿರ್ಣಾಯಕ ಅಭಿಪ್ರಾಯವು ಅಸಮಂಜಸ. ನೈತಿಕವಾಗಿ ನಾವು ಪರಮ ಶ್ರೇಷ್ಠರು ಎಂಬ ನಮ್ಮವರ ವಾದವೂ ನನಗೆ ಅರ್ಥ"ನ ವೆನಿಸಿತು ಮನದ ತುಂಬ ಮೈಲಿಗೆಯನ್ನುಟ್ಟುಕೊಂಡು ಶೀಲದ ಮಾತಾಡುವ ಘನ ಚಾರಿತ್ರ್ಯ ನಮಗೇನು ಹೊಸದಲ್ಲವಲ್ಲ? ಇರಲಿಬಿಡಿ ಕಳೆದ ಇಪ್ಪತ್ತೈದು ವಾರಗಳಿಂದ ನನ್ನ ನೀರಿಕ್ಷೆಗೂ "ರಿ ಅನೇಕ ಅನುಭವಗಳನ್ನು ದಾಖಲಿಸಿದ್ದೇನೆ. ಯಾವುದೇ ನಿರ್ಣಾಯಕ ಅಭಿಪ್ರಾಯ ನೀಡದೆ ಕೇವಲ ನನಗೆ ಅನಿಸದ್ದನ್ನು ಅಲ್ಲಿ ಕಂಡ ಐತಿಹಾಸಿಕ ಸಂಗತಿಗಳನ್ನು ತಮ್ಮೆದುರು ನಿವೇದಿಸಿದ್ದೇನೆ.
ನಮ್ಮ ದೇಶದವರೇ ಆದ ಖ್ಯಾತ ಅರ್ಥಶಾಸ್ತ್ರಜ್ಞ "ಆಮಾರ್ತ್ಯಸೆನ್" ಒಂದು ದೇಶದ ಅಭಿವೃದ್ಧಿಯನ್ನು "ಗೆ "ವರಿಸುತ್ತಾರೆ ,ಆರೋಗ್ಯ, ಶಿಕ್ಷಣ ಹಾಗೂ ವರಮಾನ ದೇಶವನ್ನು ಸಮರ್ಥವಾಗಿ ಕಟ್ಟುವ ಹಾಗೂ ಕಾಣುವ ಪ್ರಕ್ರೀಯೆಯಾಗಬೇಕು ಎಂದು.
ಅಮಾರ್ತ್ಯಸೆನ್ ರ ಇದೇ ಸೂತ್ರವನ್ನು ಒಬ್ಬ ವ್ಯಕ್ತಿಯ "ಕಸನಕ್ಕೂ ಅನ್ವುಸಿಕೊಳ್ಳಬಹುದು ಈ ಮಾತನ್ನು ವ್ಯಕ್ತಿತ್ವ "ಕಸನ ತರಬೇತಿಯ ಸಂದರ್ಭದಲ್ಲಿ ನಾನು ಅನೇಕ ಸಾರಿ ಮೆಲುಕು ಹಾಕುತ್ತೇನೆ . ಇದೇ ಸೂತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಇಂಗ್ಲೆಂಡ್'ನ ಆರೋಗ್ಯದ ಸ್ಥಿತಿಗಿತಿಯನ್ನು ನೋಡಲು ನಿರ್ಧರಿಸಿದ್ದೆ. ಅದಕ್ಕೆ ಆವಕಾಶ ಸಿಗುತ್ತದೆ ಎಂಬ ನಂಬಿಕೆಯೂ ಇತ್ತು . ಯಾಕೆದಂರೆ ನನ್ನನ್ನು ಇಂಗ್ಲೆಂಡ್ ಗೆ ಆಹ್ವಾನಿಸಿದವರೆಲ್ಲ ಆರೋಗ್ಯ ಸೇವೆಯಲ್ಲಿರುವ ವೈದ್ಯರುಗಳೇ! ವ್ರವಾಸದುದ್ದಕ್ಕೂ ನೆರವಾದ ಸೊದರ ಡಾ. ನಾಗರಾಜ, ಡಾ. ಮುರುಡಪ್ಪ ಹಾಗೂ ಡಾ. ರ" ಸಾಣಿಕೊಪ್ಪ ಸ್ನೇ"ತರೆಲ್ಲ ""ದ ರೊಗಗಳ ತಜ್ಞರು. "ಗಿರುವಾಗ ದೇಶ ನೋಡಲು ಇವರು ನೆರವಾಗುತ್ತಾರೆ ಎಂಬ "ಶ್ವಾಸ ಫಲಕಾರಿಯಾತು. ನನ್ನ "ಂದಿನ ಬಹುಪಾಲು ಲೇಖನಗಳಲ್ಲಿ ಶಿಕ್ಷಣದ ಬಗ್ಗೆ ಸಾಕಷ್ಟು ಪ್ರಸ್ತಾಪಿಸಿದ್ದೆನೆ. ಅದು ಹೆಚ್ಚು ಅಥೆಂಟಿಕ್ ಆಗಲು ನಾನು ಶಿಕ್ಷಕನಿರುವುದೇ ಕಾರಣ. ಆದರೆ ನಾನು ಈ ಬಾರಿ ಪ್ರಸ್ತಾಪಿಸುವ " ಆರೋಗ್ಯ " ನನ್ನದಲ್ಲದ ಆದರೂ ನನಗೆ ಇಷ್ಟವಾದ ಕ್ಷೇತ್ರ!
ಇತ್ತೀಚಿಗೆ ನಮ್ಮ ದೇಶದಲ್ಲಿಯೂ ನಾವು ಸುಸಜ್ಜಿತ ಐಷಾರಾ" ಆಸ್ಪತ್ರೆಗಳನ್ನು ನೋಡಿದ್ದೆವೆ. ಹಾಗಾಗಿ ನನಗೆ ಇಲ್ಲಿನ ಆಸ್ಪತ್ರೆಗಳ ಭೌತಿಕ ಭವ್ಯತೆಯ ಬಗ್ಗೆ ಅಚ್ಚರಿಯಾಗಲಿಲ್ಲ. ಬೆಂಗಳೂರಿನಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಪಂಚತಾರಾ ಹೋಟೆಲ್‌ಗಳಾಗಿವೆ . ನಾನು ಚರ್ಚಿಸ ಬಯಸುವ "ಷಯ ಇಲ್ಲಿನ ಆಸ್ಪತ್ರೆಗಳ ಭವ್ಯತೆ ಅಲ್ಲ, ವೈದ್ಯರುಗಳ ಸೇವಾ "ಶಾಲತೆ. ಆಸ್ಪತ್ರೆ, ರೋಗಿ ಹಾಗೂ ವೈದ್ಯರುಗಳ ಸ್ಥಿತಿಯನ್ನು ಖುದ್ದಾಗಿ ನೋಡಬೇಕೆಂಬ ಉತ್ಸಾಹದಿಂದ ಒಂದು ದಿನವನ್ನು ಪೂರ್ಣ ಆರೋಗ್ಯ ದರ್ಶನಕ್ಕೆ "ಸಲಿಟ್ಟೆ.
"ಶ್ವ "ದ್ಯಾಲಯದ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ಎರಡು ಒಂದೇ ಕಡೆ ಇದ್ದುದರಿಂದ ವೈದ್ಯಕೀಯ ಶಾಸ್ತ್ರವನ್ನು ಕಲಿಯುವ, ಕಲಿಸುವ ಹಾಗೂ ಚಿಕಿತ್ಸೆ ನೀಡುವ ಪದ್ಧತಿಯನ್ನು ಏಕಕಾಲಕ್ಕೆ ತಿಳಿಯಲು ಸಾಧ್ಯವಾತು. ಇಂದು ನಾವು ಭಾರತದಲ್ಲಿ ಅಳವಡಿಸಿಕೊಂಡಿರುವ "ಅಲೋಪತಿ" ಇಂಗ್ಲಿಷ್ ಮೆಡಿಸಿನ್ ಪದ್ಧತಿಯಾಗಿರುವುದರಿಂದ ನಮ್ಮ ಮೂಲ ಚಿಕಿತ್ಸಾ ಪದ್ದತಿ ಯೋಗ, ಆಯುರ್ವೇದ ನ"ಂದ ದೂರ ಸರಿದು ಮೂರು ಶತಮಾನಗಳು ಸಂದಿವೆ. ಈಗ ಮತ್ತೊಮ್ಮೆ ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸಾ "ಧಾನಗಳು ಬೆಳಕಿಗೆ ಬರುವ ಅನಿವಾರ್ಯ ಪರಿಸ್ಥಿತಿ ಉಂಟಾಗಲು ಆಲೋಪತಿ ವೈದ್ಯಕೀಯ ಪದ್ಧತಿಯ ದುರ್ಬಳಕೆಯೇ ಕಾರಣವೆನಿಸುತ್ತದೆ. ನಾವು ಬಹುಪಾಲು ನಂಬಿರುವ ಅಲೋಪತಿಯ ಮೂಲ ಯುರೋಪನಲ್ಲಿದೆ, ಆದರೆ ಆಚರಣೆ ಹಾಗೂ ಅನುಷ್ಠಾನಗಳಲ್ಲಿ ಪೂರ್ವ ಪಶ್ಚಿಮ ದಷ್ಟೇ ಅಂತರ"ದೆ !
"ಬದಲಾವಣೆ" ಎಂಬುದು ಯುರೋಪಿಯನ್ನರಿಗೆ ಅನಿವಾರ್ಯ, ಕಾಲ ಕಾಲಕ್ಕೆ ಉಂಟಾಗುವ ಬದಲಾವಣೆಯನ್ನು ಅವರು ಖಂಡಿತಾ ಸ್ವೀಕರಿಸುತ್ತಾರೆ ಆದರೆ ಯಾವುದೇ ಕ್ಷೇತ್ರಗಳಲ್ಲಿ 'ಬದಲಾವಣೆ ' ತರಬೇಕೆಂದರೆ ಆರಂಭದಲ್ಲಿಯೇ ಅನೇಕ ಸಮಸ್ಯೆಗಳನ್ನು ಎದುರಿಸುವ ವಾತಾವರಣ ನಮ್ಮ ದೇಶದಲ್ಲಿರುವದರಿಂದ 'ಬದಲಾವಣೆ' ಎಂಬ ಜೇನು ಹುಟ್ಟಿಗೆ ಕೈ ಹಾಕದೇ ಬರೀ ಗೊಣಗುತ್ತಾ ಸಾಗಿದ್ದೇವೆ.
ಇಂಗ್ಲೆಂಡಿನ ಜನ ರೋಗ ಶಾಸ್ತ್ರವನ್ನು ವೈದ್ಯರಷ್ಟೇ ಸಾಮರ್ಥವಾಗಿ ಅರಿತುಕೊಂಡ 'ಎಕ್ಸಪರ್ಟ್' ರೋಗಿಗಳು. ತಾವು ಕಟ್ಟುವ ' ಆರೋಗ್ಯ ತೆರಿಗೆ' ಸಮರ್ಪಕವಾಗಿ ಬಳಕೆಯಾಗಲಿ ಎಂದು ಬಯಸುತ್ತಾರೆ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಾಥ"ಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಿವೆ ಆದರೆ ಈ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವರ್‍ಯಾರು? ಎಂಬುದೊಂದು ಯಕ್ಷ ಪ್ರಶ್ನೆ. ಈ ದೇಶದ ಶ್ರೀಮಂತರು ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಿಗಳು ಎಂದಾದರೂ ಸರಕಾರಿ ವ್ಯವಸ್ಥೆಯ ಆಸ್ಪತ್ರೆಗಳಿಗೆ ಎಮರ್ಜನ್ಸಿ ಸ್ಥಿತಿಯಲ್ಲಿ ದಾಖಲಾಗುತ್ತಾರೆಯೇ? ಈ ಅವ್ಯವಸ್ಥೆಗೆ ನಾವು ಕೊಡುವ ಕಾರಣ ಅತೀಯಾದ ಜನಸಂಖ್ಯೆ ಎಂಬ ಅತಿರಂಜಿತ ವಾಖ್ಯಾನ . ಹೆಚ್ಚು ಜನಸಂಖ್ಯೆ ಹೆಚ್ಚು ರೋಗಿಗಳಿದ್ದಾಗಲೂ ವೈದ್ಯಕೀಯ ಸೇವೆಯನ್ನು ಸಮರ್ಪಕವಾಗಿ ಪೂರೈಸುವ ಪಕ್ಕದ ಚೀನಾ ದೇಶ ನಮಗೆ ಕಾಣಿಸುವುದೇ ಇಲ್ಲಾ. ಜನಸಂಖ್ಯೆ ಎಂಬ ಪಲಾಯನವಾದದ ಕಾರಣ ನೀಡಿ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕು ಎಂಬ ಇಚ್ಚಾಶಕ್ತಿಯ ಕೊರತೆ ನಮ್ಮ ಎಲ್ಲ ಅವಾಂತರಗಳಿಗೆ ಕಾರಣವೆನ್ನಿಸದಿರದು ಎಲ್ಲ ಕ್ಷೇತ್ರಗಳಲ್ಲಿರುವಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಬ್ರಷ್ಟತೆದೆ. ಆದರೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಭ್ರಷ್ಟತೆ ಹೆಚ್ಚು ಅಪಾಯಕಾರಿ ಎಂಬುದನ್ನು ನಾವು ತಿಳಿಯುವ ಅನಿವಾರ್‍ಯತೆದೆ. ಸರಕಾರಿ ಅಸ್ಪತ್ರೆಗಳ ಅವ್ಯವಸ್ಥೆಗೆ ಯಾರು ಕಾರಣ ಎಂಬುದನ್ನು ಇಲ್ಲಿ ಚರ್ಚಿಸುವುದು ಆಪ್ರಸ್ತುತ ಎಂದು ಭಾ"ಸಿ, ಅದನ್ನು ಬದಿಗಿರಿಸಿ ಇಂಗ್ಲೆಂಡ್‌ನ ಸರಕಾರಿ ಒಡೆತನದ ಆಸ್ಪತ್ರೆಗಳ ಸ್ಥಿತಿಯನ್ನು "ವರಿಸುವದು ಸೂಕ್ತವೆನಿಸುತ್ತದೆ.
ವೈದ್ಯಕೀಯ ಕ್ಷೇತ್ರದ ಮೊದಲ ಹಂತದ ಆರೋಗ್ಯ ನಿರ್ವಾಹಕರೆಂದರೆ ಇಲ್ಲಿನ ಜಿ.ಪಿ.ಗಳು ಇಲ್ಲಿನ 'ಜನರಲ್ ಪ್ರಾಕ್ಟೀಷ್‌ನರ್‍ಸ್' ಜನರ ಸಾಮಾನ್ಯ ರೋಗಗಳ ರಕ್ಷಕರಾಗಿದ್ದಾರೆ ಈ ಜಿ.ಪಿ ಗಳ ಸೇವೆ ಸಲ್ಲಿಸುವ ಆಸ್ಪತ್ರೆಗಳನ್ನು ನಾವು ಪ್ರಾಥ"ಕ ಆರೋಗ್ಯಕೆಂದ್ರಗಳಿಗೆ ಹೋಲಿಸಬಹುದು.ಇಲ್ಲಿನ ಪ್ರತಿ ಒಬ್ಬ ಜಿ.ಪಿ ವೈದ್ಯರುಗಳು ನಾಗರಿಕರನ್ನು ತಮ್ಮ ಸೇವಾ ಕ್ಷೇತ್ರಕ್ಕೆ ದಾಖಲಿಸಿಕೊಂಡಿರುತ್ತಾರೆ. ಇಲ್ಲಿನ ನಾಗರಿಕರು ತಾವು ನೋಂದಾಸಿದ ವೈದ್ಯರಿಂದಲೇ ಚಿಕಿತ್ಸೆ ಪಡೆಯಬೇಕು.ನೋಂದಾತ ರೋಗಿ ಹಾಗೂ ವೈದ್ಯರ ಮಧ್ಯೆ ಅ"ನಾಭಾವ ಸಂಬಂಧ"ರುತ್ತದೆ. ಹೆಚ್ಚು ಸೇವಾ ಪ್ರವೃತ್ತಿಯ ಮನೋಭಾವವುಳ್ಳ ಜಿ.ಪಿ ಗಳು ಹೆಚ್ಚು ನಾಗರಿಗಕರನ್ನು ನೊಂದಾಸಿಕೊಳ್ಳುತ್ತಾರೆ. ಇಂಗ್ಲೆಂಡ್ ಸರಕಾರದ ಆರೋಗ್ಯ ಇಲಾಖೆ ರ್‍ಟ್ರಾಯ ಆರೋಗ್ಯಸೇವೆ. ಎಂಬ ಸ್ವಾಯತ್ತ ಸಂಸ್ಥೆಗೆ ಹಣ ಬಿಡುಗಡೆಮಾಡುತ್ತದೆ ಎನ್,ಎಚ್, ಎಸ್ ಅತ್ಯಂತ ಪ್ರಾಮಾಣಿಕ, ಪಾರದರ್ಶಕ ಆಧಾರಿತ ನಿರ್ವಹಣೆಯ ಮೂಲಕ ಆರೋಗ್ಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ವೈದ್ಯರ ನೇಮಕಾತಿ, ವೇತನ, ಸೇವಾ ಮಾದರಿಯನ್ನು ನಿರ್ವ"ಸುವ ಹೊಣೆಗಾರಿಕೆಯನ್ನು ಸಂಪೂರ್ಣ ಎನ್.ಎಚ್.ಎಸ್. ಹೆಗಲಿಗೆ ಹಾಕಿದ ಸರಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವದಿಲ್ಲ.
ಇಲ್ಲಿನ ಸ್ವಾಯತ್ತ ಸಂಸ್ಥೆಗಳು ಅಷ್ಟೇ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವ"ಸುತ್ತವೆ. ಇಂಗ್ಲೆಂಡ್‌ನ ಎನ್.ಎಚ್.ಎಸ್. ತನ್ನ ಅಪ್ರತಿಮ ಸೇವೆಯ ಮೂಲಕ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿ ಬೇಸಿಕ್ ಶಿಕ್ಷಣ ಪಡೆದ ವೈದ್ಯರುಗಳು ಹೆಚ್ಚಿನ ಜವಾಬ್ದಾರಿಯನ್ನು ನಿರ್ವ"ಸುತ್ತಾರೆ. ಇದೇ ಕಾರಣದಿಂದ ಇಲ್ಲಿ ಬೇಸಿಕ್ ಶಿಕ್ಷಣ ಪಡೆದ ಜಿ.ಪಿ. ಗಳೇ ಹೆಚ್ಚು ಹಣ ಗಳಿಸುತ್ತಾರೆ. ನನಗಿದು ಅಚ್ಚರಿ ಎನಿಸಿತು. ಉನ್ನತ ವ್ಯಾಸಂಗ ಪಡೆದ ಸ್ಪೆಶಲಿಸ್ಟ್‌ಗಳು, ಕನ್ಸಲ್ಟಂಟ್‌ಗಳು, ನಿಗದಿತ ವೇತನದಲ್ಲಿ ಕೆಲಸ ಮಾಡುತ್ತಾರೆ. ಆದರೆ ಜಿ.ಪಿ ಗಳು ಅವರಿಗಿಂತಲೂ ಅಧಿಕ ಮೊತ್ತದ ವೇತನ ಪಡೆಯಲು ಬಲವಾದ ಕಾರಣವೂ ಇದೆ. ಉನ್ನತ ವ್ಯಾಸಂಗ ಪಡೆದ ನಿಪುಣ ವೈದ್ಯರು ಆಸ್ಪತ್ರೆಗಳಲ್ಲಿ ದಿನಕ್ಕೆ ಎಂಟು ತಾಸು ಕಾರ್ಯ ನಿರ್ವ"ಸುತ್ತಾರೆ. ಜಿ.ಪಿಗಳ ಮೂಲಕ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೆ. ಆದರೆ ಜಿ.ಪಿಗಳು ತಮ್ಮ ಆಸ್ಪತ್ರೆಯ ವ್ಯಾಪ್ತಿಯಲ್ಲಿ ನೊಂದಾತ ರೋಗಿಗಳ ಸೇವೆಗೆ ಸದಾ ಸನ್ನದ್ದರಾಗಿರಬೇಕು ಅಲ್ಲದೆ ಯಾವುದೆ ಸಂದರ್ಭದಲ್ಲಿ ಕರೆ ಬಂದರೆ ತಕ್ಷಣ ಹಾಜರಾಗಿ ವೈದ್ಯಕೀಯ ಸೇವೆ ನೀಡುವ ಒತ್ತಡ ಮತ್ತು ಜವಾಬ್ದಾರಿಯೂ ಇರುವದರಿಂದ ಜಿ.ಪಿಗಳು ಹೆಚ್ಚು ಹಣ ಪಡೆಯುವುದು ಅಸಮಂಜಸ ಅನಿಸುವದಿಲ್ಲ. ಜಿ.ಪಿಗಳದು ಪರಿಶ್ರಮದ ದುಡುಮೆಯಾದರೆ, ಸ್ಪೆಶಲಿಸ್ಟಗಳದು ಪರಿಣಿತಿಯ ಕುಶಲತೆಯಾಗಿದೆ. ಬೇಗ ಹಣ ಗಳಿಸುವ ಇಚ್ಛೆಯುಳ್ಳವರು ಜಿ.ಪಿಗಳಾಗುತ್ತಾರೆ. ""ದ ರೋಗಗಳಲ್ಲಿ ಪರಿಣಿತಿ ಪಡೆಯುವ ಆಸಕ್ತಿ ಹಾಗೂ ಸಹನೆವುಳ್ಳವರು ಸ್ಪೆಶಲಿಸ್ಟಗಳಾಗುತ್ತಾರೆ. ತಮಗೆ ಹೆಚ್ಚಿನ ಹಣದ ಅಗತ್ಯ ಕಂಡು ಬಂದರೆ ಹೆಚ್ಚುವರಿ ಕೆಲಸ ಮಾಡುವ ಅವಕಾಶವನ್ನು ಎನ್.ಎಚ್.ಎಸ್. ಕಲ್ಪಿಸಿಕೊಡುತ್ತದೆ. ಪ್ರಾಮಾಣಿಕವಾಗಿ ಸೇವೆ ಮಾಡಿದಾಗ ನೀರಿಕ್ಷೆಗಿಂತ ಹೆಚ್ಚು ಹಣ ಸಿಗುವಾಗ ಭ್ರಷ್ಟತೆ ಕಲ್ಪನೆ ಇಲ್ಲಿನ ವೈದ್ಯರ ಮನಸ್ಸಿನಲ್ಲಿ ಸುಳಿಯಲು ಸಾದ್ಯ"ಲ್ಲ. ಭ್ರಷ್ಟರಾಗದೆ ದುಡಿದ ಪ್ರೊಫೆಶನಲ್ ಸೆಟಿಸ್‌ಫೆಕ್ಷನ್ ಇಲ್ಲಿಯ ವೈದ್ಯರ ಪಾಲಿಗಿದೆ. ವೃತ್ತಿ ಘನತೆ, ಅಭಿಮಾನ, ಸೇವಾ ತತ್ಪರತೆ ಇದ್ದರೆ ಮಾತ್ರ ಇಲ್ಲಿ ಕೆಲಸ ಮಾಡಲು ಸಾಧ್ಯ. ರೋಗಿಗಳನ್ನು ಕಾಳಜಿಂದ ನೋಡಿಕೊಳ್ಳುವುದಲ್ಲದೆ, ನಯವಾಗಿ ವರ್ತಿಸುವುದು ಅಷ್ಟೇ ಅಗತ್ಯ"ದೆ. ವಯಸ್ಸಾದ ರೋಗಿಗಳಿಗೆ ಚಿಕಿತ್ಸೆ ನೀಡುವಾಗ "ರಿಯ ವೈದ್ಯರೇ ಮಂಡಿಯೂರಿ ಕುಳಿತಿದ್ದು ನನಗೆ "ಸ್ಮಯವೆನಿಸಿತು. ಚಿಕಿತ್ಸೆ ನೀಡುವ ಎಲ್ಲ ಔಷಧಿಗಳ ಕುರಿತು ರೋಗಿಗೆ "ವರಿಸಬೇಕು. ರೋಗಕ್ಕೆ ಅಪಥ್ಯವಾದ ಚಟಗಳಿದ್ದರೂ ರೋಗಿಗಳಿಗೆ ತೀಕ್ಷ್ಣವಾಗಿ ಮಾತನಾಡದೇ ಸಿಗರೇಟ್ ಸೇದಲು, ಮದ್ಯಪಾನ ಸೇ"ಸಲು ಸ್ವತಃ ವೈದ್ಯರೇ ನೆರವಾಗಬೇಕು. ತಕ್ಷಣ ನಿಲ್ಲಿಸಲು ಆದೇಶಿಸುವಂತಿಲ್ಲ. ಬಡವರು, ಶ್ರೀಮಂತರು ಎಂಬ ಬೇಧಭಾವ"ಲ್ಲದೆ ರೋಗಿಗಳನ್ನು ಪ್ರೀತಿಂದ ಕಾಣಬೇಕು. ಇಲ್ಲಿ ರೋಗಕ್ಕೆ ತಕ್ಕ ವಾರ್ಡುಗಳನ್ನು ಒದಗಿಸಲಾಗುತ್ತದೆ, ರೋಗಿಯ ಘನತೆಗೆ ತಕ್ಕಹಾಗೆ ಅಲ್ಲ! ರೋಗಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಉಳಿದ ರೋಗಿಗಳಂತೆ ಸಮಾನವಾಗಿ ಕಾಣಲಾಗುವುದು. ಆಸ್ಪತ್ರೆಯ ಈ ಎಲ್ಲ "ವರಗಳನ್ನು ಕೇಳಿ, ಕಣ್ಣಾರೆ ಕಂಡು ಕೆಲ ಕ್ಷಣ ಕಣ್ಣು ಮುಚ್ಚಿಕೊಂಡು ನಮ್ಮ ದೇಶದ ಸರಕಾರಿ ಆಸ್ಪತ್ರೆಗಳನ್ನು ನೆನಪಿಸಿಕೊಂಡೆ. ನನಗೆ ಅನಿಸಿರುವುದನ್ನು ನಿಮ್ಮ ಊಹೆಗೆ ಬಿಡುತ್ತೇನೆ.

0 comments: