ಜಗದಣ್ಣ

>> Tuesday, April 27, 2010


ಗೋಮುಖ ವ್ಯಾಘ್ರರು ಒಲೆ-ಧರೆ ಹತ್ತಿಸಿ
ಉರಿವಾಗ-ಉರಿಯಲಿ ಮೈಕಾಸಿಕೊಂಡಾಗ
ಜ್ಞಾನದ ಬಲದಿಂದ ಹೊತ್ತಿಕೊಂಡ ಚಿಜ್ಯೋತಿ.
ಉಳ್ಳವರ ಶಿವಾಲಯಗಳ ಉರುಳಿಸಿ ಇಷ್ಟ
ದೇವರ ಅಂಗೈಗಿಟ್ಟವ, ಗುಡಿಗೋಪುರ ಮಂಟಪ
ಗಳ ಗಾಳದಿ ಸಿಕ್ಕವರ 'ಅನುಭವ' ಮಂಟಪದಿ ಪ್ರತಿಷ್ಠಾಪಿಸಿದವ.
ಅಕ್ಕ, ಅಲ್ಲಮರ ವಚನ ಗಾನಕೆ ತಪ್ಪದೇ
ತಾಳ ಹಾಕಿದವ, ಎಲ್ಲರನು ಇವ ನಮ್ಮವ
ಎಂದೆನಿಸಿದರೂ ದುಷ್ಟ ದುರುಳರಿಗೆ ದುರಾಚಾರಿಗಳಿಗೆ
ಇವನಾರವ-ಎನಿಸಿದರೂ ಲೆಕ್ಕಿಸದೆ ತಲೆದಂಡ
ಹಿಡಿದು ರಾಜಮಾರ್ಗ ಸೃಷ್ಠಿಸಿದವ.
ಸಾವಿರ ವರುಷಗಳುರುಳಿದರೂ ಸಾವಿರದ ಸರದಾರ
ಸುಳಿದು ಸೂಸುವ ಗಾಳಿಯಲಿ ಪಡೆದು ಧನ್ಯವಾಗುವ
ಉಸಿರಿನಲಿ ಸದಾ ನೀನೇ ಅಣ್ಣ ಬಸವಣ್ಣ-ಜಗದಕಣ್ಣಣ್ಣ

0 comments: