ಬತ್ತಿ ಹೋಗಲಿ ಕಣ್ಣೀರು
>> Monday, April 26, 2010
ಬತ್ತಿ ಹೋಗಲಿ ಕಣ್ಣೀರು
ನಿತ್ಯ ಗೋಳನು ಕಂಡು
ಸುರಿಯದಂತೆ
ಯಾಕೆ ಅಳಬೇಕು ಹೃದಯ
ಸಿರಿಯಲಿ ಅಡಗಿದ್ದವರು
ತಿರುಗಿ ಬಾರದೆ ಹೋದರೆ
ಅತ್ತರೆ ಆತ್ಮ ಶಾಂತಿ
ಯಾರಿಗೆ?
ಅಳಿದವರಿಗೋ, ಉಳಿದವರಿಗೋ
ದು:ಖ-ದುಮ್ಮಾನ ನಿತ್ಯ ಕಾಡುತಲಿರಲು
ಅರ್ಥವೆಲ್ಲಿದೆ ಈ ಅಳುವಿಗೆ
ನರಳುವ ಜೀವಿಗಳ
ರಸ್ತೆ ಬದಿಯಲಿ ಛಳಿಯಲಿ
ಬೀಳುವವರ ಮೈನಡುಕವ ಕಂಡೋ
ದ್ಯಾಸದಲಿ ಕೊರಗುವ. ಅಕ್ಷರವ
ಅರಿಯದ ಅಮಾಯಕರ ದಂಡುಗಳ ಕಂಡೋ
ಅಳುವದು ಕೊರಗುವದು ಯಾರಿಗಾಗಿ
ಯಾರಿಗಾಗಿ?
ಅದಕೆ ಬೇಡವೇ ಬೇಡ
ಕಣ್ಣೀರು ಬತ್ತಿ ಹೋಗಲಿ
ಮತ್ತೆ ಚಿಮ್ಮದಂತೆ
ನಿತ್ಯ ಗೋಳನು ಕಂಡು
ಸುರಿಯದಂತೆ
ಯಾಕೆ ಅಳಬೇಕು ಹೃದಯ
ಸಿರಿಯಲಿ ಅಡಗಿದ್ದವರು
ತಿರುಗಿ ಬಾರದೆ ಹೋದರೆ
ಅತ್ತರೆ ಆತ್ಮ ಶಾಂತಿ
ಯಾರಿಗೆ?
ಅಳಿದವರಿಗೋ, ಉಳಿದವರಿಗೋ
ದು:ಖ-ದುಮ್ಮಾನ ನಿತ್ಯ ಕಾಡುತಲಿರಲು
ಅರ್ಥವೆಲ್ಲಿದೆ ಈ ಅಳುವಿಗೆ
ನರಳುವ ಜೀವಿಗಳ
ರಸ್ತೆ ಬದಿಯಲಿ ಛಳಿಯಲಿ
ಬೀಳುವವರ ಮೈನಡುಕವ ಕಂಡೋ
ದ್ಯಾಸದಲಿ ಕೊರಗುವ. ಅಕ್ಷರವ
ಅರಿಯದ ಅಮಾಯಕರ ದಂಡುಗಳ ಕಂಡೋ
ಅಳುವದು ಕೊರಗುವದು ಯಾರಿಗಾಗಿ
ಯಾರಿಗಾಗಿ?
ಅದಕೆ ಬೇಡವೇ ಬೇಡ
ಕಣ್ಣೀರು ಬತ್ತಿ ಹೋಗಲಿ
ಮತ್ತೆ ಚಿಮ್ಮದಂತೆ
0 comments:
Post a Comment