ಅಂಧ ಆಂಕ್ರಂದನ

>> Saturday, September 25, 2010


ವಿಧಿ ಕಣ್ಣು ಕಟ್ಟಿದಾಗ
ಒಳಗಣ್ಣು ತೆರೆಸಿದ ಕರುಣಾ
ಸಾಗರನೆ.
ಹೆತ್ತೊಡಲ ಬರಸಿಡಿಲಿಗೆ
ಕಾರಣನಾಗಿ
ಬದುಕು ಶೂನ್ಯ
ವಾದಾಗ ಅಸಂಖ್ಯೆ
ಸಂಖ್ಯೆ ಬಳಸಿ ಬಾಳ
ಪಯಣದಿ ಜೀವಯಾನಕೆ
ಭಾವ ತುಂಬಿದ ಗುರುವಿನ
ಗುರುವೆ.
ನಾದ ಲೋಕದೊಳೊಂದು
ಹೊಸ ಲೋಕ ಸೃಷ್ಟಿಸಿ ದಿವ್ಯ
ಬೆಳಕ ತೋರಿ ಅಂಧತ್ವ
ದೂರಾಗಿಸಿದ ಜಗದಾದಿ ಗುರುವೆ.
ನೀನಿಲ್ಲದ ಜಗದ ಶೂನ್ಯವ
ತುಂಬುವ ಶಕ್ತಿ ಕರುಣಿಸು
ದಯಾಮಯಿ ಪ್ರಭುವೆ.
                                            ಸಿದ್ದು ಯಾಪಲಪರವಿ
                                                                    # 123 ಸಾಂಗತ್ಯ ಪ್ರಕಾಶನ ,ಶರಣಾರ್ಥಿ   ವಿಶ್ವೇಶ್ವರಯ್ಯನಗರ
ಕಳಸಾಪುರ ರಸ್ತೆ
ಗದಗ - 582103
9448358040

0 comments: