ಯಾರಿವರು?
>> Thursday, April 29, 2010
ನಮ್ಮ ರಕ್ತ ಹಂಚಿಕೊಂಡು
ಹುಟ್ಟಯೂ ದೂರ ತಳ್ಳಲ್ಪಟ್ಟ
ನತದೃಷ್ಟರಿವರು
ಓಟಗಿಟ್ಟಿಸಲು ಪುಂಡರು
ಇವರನು ಛಿದ್ರವಾಗಿಸಲು ಹೊರಟಿದ್ದಾರೆ
ಜಾತಿಯ ಪಟ್ಟ ಕಟ್ಟಿ
ದೂರ, ದೂರ ಸರಿಯುತಲಿಹರು
ಭಿನ್ನ ಭೇದಗಳ ಸೃಷ್ಟಿಸಿದವರ ಮಾತ ನಂಬಿ
ಯಾರಿಲ್ಲ ಇವರ ಸುತ್ತ
ಶೋಷಣೆಗೊಳಗಾದಾಗಲೆಲ್ಲ
ಪೇಪರಿನಲ್ಲಿ ಬರೆಸಿಕೊಳ್ಳಲು, ಶಬ್ಬಾಸಗಿರಿ
ಗಿಟ್ಟಿಸಲು ಎಲ್ಲರೂ ಹೋಗೋಗಿ ಬರುತಾರೆ
ಕೇರಿಗೆ, ತಕ್ಷಣ ತಪ್ಪದೆ ಸ್ನಾನ ಮಾಡು ತಾರೆ
ಮೈಲಿಗೆ ಆಯಿತೆಂದು ಬಡಬಡಿಸಿ
ಗಾಂಧಿ, ಬಸವ, ಅಂಬೇಡ್ಕರ ಸಿಕ್ಕು
ನರಳುತಿರುವರು ಪುಢಾರಿಗಳ ಬಾಯಲಿ
ದಲಿತೋದ್ಧಾರ ನೆಪದಲಿ
ಇನ್ನೂ ಮಲ ತಿನ್ನುವ, ಚಾಟಿಗೆ ಮೈ
ಒಡ್ಡುವ ಕಣ್ಣಲಿ ನೋವ ರಕ್ತ ಸುರಿಸುವರ
ಕಣ್ಣೊರೆಸಲು ಆಗೀಗ ಬರುವರೆಲ್ಲ
ಯಾರಿಗೂ ಬೇಕಿಲ್ಲ ಮನಸಾರೆ ಕೊಡುವದು
'ರಿಜರ್ವೇಶನ್' ತಮ್ಮ ಹೃದಯದಲಿ.
0 comments:
Post a Comment